Thursday, February 23, 2017

ಬಿಡುಗಡೆ

ಅವತ್ತು ಸಂಜೆ ಗಾಂಧಿ ಬಜಾರಿನಿಂದ ಮನೆಗೆ ಬರುತ್ತಿದ್ದಾಗ, ಪಕ್ಕದ ಮನೆಯ ನಾರಾಯಣರಾಯರು ಗೇಟಿನ ಬಳಿಯಲ್ಲಿ ಸಿಕ್ಕರು. ಸುಮಾರು ಎಂಭತ್ತು ವರ್ಷದ ರಾಯರನ್ನು ಕಂಡರೆ ನಮ್ಮ ಬಡಾವಣೆಯ ಎಲ್ಲರಿಗೂ ಪ್ರೀತಿ. ಒಂದು ತೆರನಾದ ಗೌರವ. ನಮ್ಮ ತಲೆಮಾರಿನವರು ಅವರನ್ನು ಸಹಜವಾಗಿಯೇ 'ತಾತ' ಎಂದು ಸಂಬೋಧಿಸುತ್ತೇವೆ. ಅವರಿಗೆ, ಅದೇಕೋ, ನಮ್ಮ ಮನೆಯವರು ಅಂದರೆ ವಿಶೇಷ ಆತ್ಮೀಯತೆ. ನಮಗೂ ಅಷ್ಟೇ. ಮಗ, ಮಗಳು ವಿದೇಶದಲ್ಲಿದ್ದದ್ದರಿಂದ  ಪ್ರತಿ ಹಬ್ಬಕ್ಕೂ ರಾಯರನ್ನು ನಮ್ಮ ಮನೆಗೆ ಊಟಕ್ಕೆ ಕರೆಯುತ್ತೇವೆ. ಅಷ್ಟೇ ಅಲ್ಲ. ಅಮ್ಮ ಮನೆಯಲ್ಲಿ ಏನೇ ಸ್ಪೆಷಲ್ ಅಡಿಗೆ ಮಾಡಿದರೂ ಅವರಿಗೆ ತಲುಪುತ್ತದೆ. ಕಿವಿ ಸ್ವಲ್ಪ ಊನವಾಗಿದೆ  ಎನ್ನುವುದು ಬಿಟ್ಟರೆ, ರಾಯರು ದೃಢವಾಗಿಯೇ ಇದ್ದಾರೆ.

ಗೇಟಿನ ಬಳಿ ಸಿಕ್ಕ ತಾತ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದವರೇ ಅವರ ಮನೆಯ ಹಜಾರದಲ್ಲಿ ಹರಡಿಕೊಂಡಿದ್ದ ಮಾಸಲು ತಿರುಗಿದ್ದ ಕೆಲವು ಪತ್ರಿಕೆಗಳನ್ನೂ ಭಾವಚಿತ್ರಗಳನ್ನೂ ತೋರಿಸಿ ಅವುಗಳ ಹಿಂದಿನ ಕಥೆ ಹೇಳಲು ಶುರು ಮಾಡಿದರು. ಅವುಗಳ ನಡುವೆ ಒಂದು ಹತ್ತು - ಹನ್ನೊಂದು ವರ್ಷದ ಹುಡುಗನ ಭಾವಚಿತ್ರವೂ ಇತ್ತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶಾಲೆಯ ಯಾವುದೋ ಕಾರ್ಯಕ್ರಮಕ್ಕಾಗಿ ತಾತ ಪೋಷಾಕು ಧರಿಸಿದ್ದಾಗ ತೆಗೆದಿದ್ದಂತೆ. ಇವುಗಳನ್ನು ನೆನೆಸಿಕೊಳ್ಳುತ್ತಾ ಸ್ವಲ್ಪ ಭಾವುಕರಾದರು. ಆದರೆ ನನಗೇಕೆ ಇದನ್ನೆಲ್ಲಾ ಹೇಳುತ್ತಿದ್ದಾರೆ ಎಂದು ಅರ್ಥವಾಗದೆ, ಅವರನ್ನು ಕೇಳಿದೆ. "ನನಗಾದರೂ ಇಲ್ಲಿ ಯಾರಿದ್ದಾರೆ? ಮೊಮ್ಮಕ್ಕಳು ಇಲ್ಲೇ ಇದ್ದಿದ್ರೆ, ಅವರಿಗೆ ಹೇಳ್ತಿದ್ದೆ. ಅವರ ಸ್ಥಾನದಲ್ಲಿ ನೀನಿದ್ದೀಯ" ಎಂದು ತಾತ ಹೇಳಿದಾಗ ನನಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ಸ್ವಲ್ಪ ಹೊತ್ತಿನ ನಂತರ "ನೀವು ಯಾಕೆ ಹೋಗಿ ನಿಮ್ಮ ಮಗಳ ಮನೇಲಿ ಸ್ವಲ್ಪ ದಿನ, ಮಗನ ಮನೇಲಿ ಸ್ವಲ್ಪ ದಿನ ಇರಬಾರದು?" ಎಂದು ಕೇಳಿದೆ. ಅದಕ್ಕೆ ತಾತ "ಆ ಪ್ರಯತ್ನಾನೂ ಮಾಡಿದ್ದೀನಿ. ಇವಳು ತೀರಿಹೋದಾಗ ನನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲ ಬಂದಿದ್ರು. ಅದೊಂದೇ ಸಲ ಅನ್ಸತ್ತೆ ಹಾಗೆ ಎಲ್ಲ ಒಟ್ಟಿಗೆ ಸೇರಿದ್ದು. ಇವಳು ಹೋಗಿದ್ದಕ್ಕೆ ಅಳಬೇಕಾ? ಖುಷಿ ಪಡಬೇಕಾ? ಅಂತ ಒಂದು ಕ್ಷಣ ಅರ್ಥವೇ ಆಗ್ಲಿಲ್ಲ! ಹೋಗ್ಲಿ ಬಿಡು. ನಾನೊಬ್ಬನೇ ಇಲ್ಲಿ ಇದ್ದು ಏನು ಮಾಡಬೇಕು ಅಂತ ಮಗ ಎರಡು ಮೂರು ಸಲ ಹೋಗಿ ಬಂದು ಮಾಡಿ ನನ್ನನ್ನ ಅವ್ನ ಜೊತೆ ಕರೆದುಕೊಂಡು ಹೋಗೋದಕ್ಕೆ ವ್ಯವಸ್ಥೆ ಮಾಡಿದ. ಹೋದ ಸ್ವಲ್ಪ ದಿನ ಅವ್ನು, ಸೊಸೆ ಇಬ್ರೂ ರಜ ಹಾಕಿ ನನ್ನ ಜೊತೇನೆ ಇದ್ರು. ದೇಶಾನೂ ಸುತ್ತಿಸಿದ್ರು. ಆದ್ರೆ ಅವ್ರು ಕೂಡ ಎಷ್ಟು ದಿನ ಅಂತ ಈ ಮುದುಕನ ಮುಂದೆ ಕೂರಕ್ಕಾಗತ್ತೆ ಹೇಳು? ಜೀವನ ನಡಿಬೇಡ್ವ? ಅವ್ರು ಕೆಲಸಕ್ಕೆ ಹೋದ್ಮೇಲೆ, ನಾನು ಅಲ್ಲಿ ಟಿವಿ ನೋಡ್ತಾ ಇದ್ದೆ. ಪುಸ್ತಕ ಓದ್ತಾ ಇದ್ದೆ. ಹೇಗೋ ಒಂದೆರಡು ತಿಂಗಳು ತಳ್ಳಿದ್ದಾಯ್ತು. ಆಗ ಅನ್ನಿಸ್ತು. ಇಷ್ಟನ್ನ ಮಾಡಕ್ಕೆ ನಾನು ನನ್ನ ಮನೆ ಬಿಟ್ಟು, ನನ್ನ ಊರು ಬಿಟ್ಟು ಇಲ್ಲಿಗೆ ಯಾಕೆ ಬರಬೇಕಿತ್ತು ಅಂತ. ಮಗನಿಗೆ ಹೇಳಿದೆ. ಪಾಪ, ಕರೆದುಕೊಂಡು ಬಂದು ಬಿಟ್ಟು, ಹೋದ. ಇಲ್ಲಿಗೆ ಬಂದ ತಕ್ಷಣ, ಅದೇನೋ, ಒಂದು ರೀತಿಯ ಬಿಡುಗಡೆ ಸಿಕ್ಕಹಾಗಾಯ್ತು. ಅಲ್ಲಿ ಚೆನ್ನಾಗಿ ನೋಡ್ಕೊತಿರ್ಲಿಲ್ಲ ಅಂತ ಅಲ್ಲ. ನನ್ನ ಸೊಸೆ, ಮಗಳ ಥರಾನೇ ನೋಡ್ಕೋತಾಳೆ. ಮೊಮ್ಮಕ್ಕಳು ಭಾಷೆ ಅಷ್ಟಾಗಿ ಬರದಿದ್ರೂ ದಿನ ಬೆಳಗ್ಗೆ, ರಾತ್ರಿ 'ಗುಡ್ ಮಾರ್ನಿಂಗ್', 'ಗುಡ್ ನೈಟ್' ಅಂತ ತಪ್ಪದೇ ಹೇಳ್ತಾ ಇದ್ರು. ಈ ಮುದುಕಂಗೇನೇ ಅದನ್ನ ಹೇಳಿಸಿಕೊಳ್ಳೋ ಅದೃಷ್ಟ ಇಲ್ಲ" ಎನ್ನುತ್ತಾ ವಿಷಾದದ ನಗೆ ನಕ್ಕರು ರಾಯರು.

ಅದೆಷ್ಟು ಹೊತ್ತು ಹಾಗೇ ಕುಳಿತಿದ್ದೆನೋ? ಕೊನೆಗೆ ತಾತನೇ ಮೌನ ಮುರಿದರು. "ಪಾಪ, ನನ್ನ ಮಕ್ಕಳದ್ದು ಏನೂ ತಪ್ಪಿಲ್ಲ, ಬಿಡು. ಅವರನ್ನ ಚೆನ್ನಾಗಿ ಓದ್ಸಿದ್ದು ಅವ್ರ ಜೀವನ ಅವ್ರು ರೂಪಿಸಿಕೊಬೇಕು ಅಂತ ತಾನೇ? ಹಕ್ಕಿಗೆ ಹಾರೋದು ಹೇಳಿಕೊಟ್ಟು 'ಹಾರಬೇಡ. ಗೂಡಲ್ಲೆ ಇರು' ಅಂದ್ರೆ ಅದು ಕೇಳತ್ತಾ? ನಂಗೇನು ಕಡಿಮೆ ಮಾಡಿಲ್ಲ ನನ್ನ ಮಕ್ಕಳು. ಪ್ರತಿ ತಿಂಗಳು ಹಣ ಕಳಿಸ್ತಾರೆ. ಹೋದ ಸಲ ನನ್ನ ಮಗಳು ಬಂದಿದ್ದಾಗ 'ಇನ್ಮೇಲೆ ನೀನೇ ಅಡಿಗೆ ಮಾಡ್ಕೊಬಾರದು' ಅಂತ ಖಡಾಖಂಡಿತವಾಗಿ ಹೇಳಿ, ಒಬ್ಬ ಅಡಿಗೆಯವಳ್ನ, ಕೆಲಸದವಳ್ನ ಗೊತ್ತು ಮಾಡಿಕೊಟ್ಟು ಹೋದ್ಲು. ಅವ್ಳಿಗೆ ಹಣನೂ ನಾನು ಕೊಡೋದು ಬೇಡ ಅಂದ್ಲು. ತಿಂಗಳಾಗ್ತಾ ಇದ್ದ ಹಾಗೆ ಅವ್ರ ಅಕೌಂಟ್ಗೆ ಕಳಿಸೋ ರೀತಿ ವ್ಯವಸ್ಥೆನೂ ಮಾಡಿದ್ದಾಳೆ. ಎರಡು ದಿನಕ್ಕೆ ಒಂದು ಸಲ ಇಬ್ರಲ್ಲಿ ಒಬ್ರು ಫೋನ್ ಮಾಡ್ತಾರೆ. ವಾರಕ್ಕೋ ಹತ್ತು ದಿನಕ್ಕೋ ಒಂದು ಸಲ ಸ್ಕೈಪ್ ಮಾಡ್ತೀವಿ. ಥೇಟು ಇಲ್ಲೇ ಇದ್ದ ಹಾಗೆ ಆಗತ್ತೆ. ಇಲ್ಲಿ ಇಲ್ಲ ಅಷ್ಟೆ" ಎನ್ನುತ್ತಾ ತಾತ ನಿಟ್ಟುಸಿರು ಬಿಟ್ಟರು.


"ಅಲ್ಲಿಗೆ ಹೋದಮೇಲೆ ಒಂದು ವಿಚಾರ ಗೊತ್ತಾಯ್ತು. ಅಲ್ಲಿ ಎಲ್ಲರೂ ಇದ್ದು ಒಂಟಿಯಾಗಿ ಇರೋದಕ್ಕಿಂತ, ಇಲ್ಲಿ ಒಬ್ಬನೇ ಇದ್ರೂ ನಿಮ್ಮಗಳ ಜೊತೆ, ನಾನು ಬೆಳೆದ ಊರಿನಲ್ಲಿ ಇರೋದೇ ಹೆಚ್ಚು ಸೂಕ್ತ" ಎಂದು ಅವರು ಹೇಳಿದಾಗ ಅವರು ಬಹಳ ಬಳಲಿದ್ದರು ಎಂದು ತಿಳಿಯುತ್ತಿತ್ತು. ಆದರೆ, ಅವರಿಗೆ ನಾನು ಏನೆಂದು ಸಮಾಧಾನ ಹೇಳಲಿ ಎಂದು ತಿಳಿಯದೆ ಒದ್ದಾಡುತ್ತಿದ್ದಾಗ ಮನೆಯಿಂದ ಫೋನ್ ಬಂತು. ತಾತನನ್ನು ಅವರ ಭಾವನೆಗಳೊಂದಿಗೆ ಏಕಾಂತದಲ್ಲಿ ಬಿಟ್ಟು ಹೊರಬಂದಾಗ, ಕಣ್ಣುಗಳು ಮಂಜಾಗಿದ್ದವು.

Wednesday, February 15, 2017

ದೃಷ್ಟಿಕೋನ

ಹೋದ ಮಂಗಳವಾರ ಮನೆಗೆ ಕರೆ ಮಾಡಿದ್ದಾಗ, ಇತರೆ ಹಲವಾರು ವಿಚಾರಗಳ ಜೊತೆಗೆ ಅಣ್ಣ ಮೂರ್ತಿಯವರು ತೀರಿಹೋದ ವಿಚಾರವನ್ನೂ ಹೇಳಿದ. 'ಅಯ್ಯೋ, ಪಾಪ' ಎಂದು ನಾಮ್-ಕೆ-ವಾಸ್ತೆ ಒಂದೆರಡು ಕನಿಕರದ ಮಾತುಗಳನ್ನಾಡಿ ಮಾತು ಬೇರೆಡೆಗೆ ಹೊರಳಿತು. ಆಗ  ಬಾಧಿಸದ ಅವರ ಸಾವಿನ ವಿಚಾರ ಆನಂತರ ಅದೇಕೋ ಕೊರೆಯ ತೊಡಗಿತು. ಅವರೇನು ತೀರಾ ಹತ್ತಿರದ ಸ್ನೇಹಿತರಲ್ಲ. ಸಂಬಂಧಿಯಂತೂ ಅಲ್ಲವೇ ಅಲ್ಲ. ಹೀಗಿದ್ದರೂ ಯಾಕೆ ಬಾಧಿಸುತ್ತಿದೆ ಎಂದು ಅರ್ಥವಾಗದೇ, ಕ್ಯಾಂಟೀನಿನಲ್ಲಿ ಕಾಫಿ ಹೀರುತ್ತಾ ಯೋಚಿಸತೊಡಗಿದೆ. 

ರಾಮಮೂರ್ತಿಯವರು ಎಂದ ಕೂಡಲೇ ಅವರ ರೂಪಕ್ಕಿಂತ ಮೊದಲು, ಮೂಗಿನಲ್ಲಿ ಮಾತಾಡುತ್ತಿದ್ದ ಅವರ ಧ್ವನಿ ನೆನಪಾಗುತ್ತಿತ್ತು. ಅದೇ ಧ್ವನಿಯಲ್ಲಿ ತಕ್ಕ ಮಟ್ಟಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದರು ಕೂಡ. ಒಂದು ಕಾಲದಲ್ಲಿ ಕರ್ನಾಟಕದ ರಣಜಿ ತಂಡದಲ್ಲಿ ಆಡಿದ್ದರಂತೆ. ಅವರಿಗೆ ಮದುವೆಯಾಗಿರಲಿಲ್ಲವೆಂದೂ, ಅವರ ಸೋದರ ಸಂಬಂಧಿಗಳು ಮೋಸ ಮಾಡಿ ಪಿತ್ರಾರ್ಜಿತವಾಗಿ ಬಂದಿದ್ದ ಮನೆ ಕಸಿದುಕೊಂಡರೆಂದು ಅಪ್ಪ, ಮಾವ ಇವರುಗಳು ಎಂದೋ ಇನ್ಯಾವುದೋ ಸಂಭಾಷಣೆಯಲ್ಲಿ ಹೇಳಿದ್ದು ನೆನಪಾಯಿತು. 

ನನಗೆ ನೆನಪಿದ್ದಾಗಿನಿಂದಲೂ ಮೂರ್ತಿಯವರದ್ದು ಮುಕ್ಕಾಲು ಬೋಳುತಲೆ. ಇದ್ದ ಸ್ವಲ್ಪ ಬಿಳಿಕೂದಲನ್ನು ಚೆನ್ನಾಗಿ ಬಾಚಿ, ಬಿಸಿಲಿನಲ್ಲಿ ಹೊಳೆಯುವಂತೆ ಬುರುಡೆಗೆ ಎಣ್ಣೆ ತಿಕ್ಕಿ, ನಮ್ಮ ಮನೆಯಿದ್ದ ರಸ್ತೆಯ ಮೂಲಕವಾಗಿ ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಖಾದಿ ಜುಬ್ಬಾ ಪಂಚೆಯೊಂದಿಗೆ ಶಲ್ಯ ಹೊದ್ದು, ದಾರಿಯುದ್ದಕ್ಕೂ "ನಾನು ಕ್ರಿಕೆಟ್ ಆಟ ಆಡೋದಕ್ಕೆ..." ಎಂದು ಸ್ವರಚಿತ ಹಾಡೊಂದನ್ನು ರಾಗವಾಗಿ ಹಾಡುತ್ತಿದ್ದರು. ಆ ಹಾಡು ಕೇಳಲಿಕ್ಕೆಂದೇ ಎಷ್ಟೋ ಬಾರಿ ಮನೆಯಿಂದ ಹೊರಗೆ ಬಂದು ನಿಂತಿರುತ್ತಿದ್ದೆ. ದೇವಸ್ಥಾನದಲ್ಲಿ ಅರ್ಚನೆ-ಅಭಿಷೇಕಗಳ ಚೀಟಿ ಬರೆಯುತ್ತಿದ್ದ ಅವರು, ನಾನು ನಮ್ಮ ಮಾವನೊಂದಿಗೆ ಪ್ರತಿ ಮಂಗಳವಾರ ದೇವಸ್ಥಾನಕ್ಕೆ ಹೋದಾಗ, ಕರೆದು ತೆಂಗಿನಕಾಯಿ ಚೂರುಗಳನ್ನೋ, ಬಾಳೆಹಣ್ಣೊಂದನ್ನೋ ಕೊಡುತ್ತಿದ್ದರು. ಇದೆಲ್ಲ ಸುಮಾರು ವರ್ಷಗಳ ಹಿಂದಿನ ಮಾತು. 

ಹೀಗಿರುವಾಗ, ಇದ್ದಕ್ಕಿದಂತೆ ಮೂರ್ತಿಯವರು ದೇವಸ್ಥಾನದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರು. ಕಾಯಿ ಚೂರು ಬಾಳೆಹಣ್ಣುಗಳು ತಪ್ಪಿ ಹೋಗುವ ಆತಂಕದಲ್ಲಿ ನಾನು ಮನೆಗೆ ಬಂದಿದ್ದ ಅತ್ತೆ, ಮಾವನನ್ನು ಮೂರ್ತಿಯವರ  ಬಗ್ಗೆ ಕೇಳಿದೆ. "ಲೆಕ್ಕದಲ್ಲಿ ತಪ್ಪು ಮಾಡಿದರಂತೆ" ಎಂದು ಹೇಳಿ ಮಾತು ತೇಲಿಸಿದ ಅವರು, ಆನಂತರ ನನಗೆ ಏನೂ ತಿಳಿಯದ ವಯಸ್ಸು ಎಂದು ಭಾವಿಸಿ ನನ್ನ ಮುಂದೆಯೇ ಒಳಕಾರಣವನ್ನು ಅಪ್ಪ ಅಮ್ಮನೊಡನೆ ಚರ್ಚಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅರ್ಚನೆಗಾಗಿ ಬರೆಸಲು ಹೆಂಗಸರು ಬಂದಾಗ ಮೂರ್ತಿಯವರು ಬೇಕೆಂದೇ ತಡ ಮಾಡುತ್ತಿದ್ದರಂತೆ. ಅಗತ್ಯಕ್ಕಿಂತ ಹೆಚ್ಚಿನ ಸಲಿಗೆಯಿಂದ ಅವರೊಡನೆ ಮಾತಾಡುತ್ತಿದ್ದರಂತೆ. ಇದನ್ನು ಅದ್ಯಾರೋ ದತ್ತಿಯ ಗಮನಕ್ಕೆ ತಂದು, ಆಡಳಿತ ಮಂಡಳಿಯವರು ಅವರನ್ನು ವಜಾಗೊಳಿಸಿದರು ಎಂದು ನಮ್ಮ ಮಾವನಿಗೆ ಪರಿಚಯವಿದ್ದ ಅರ್ಚಕರೊಬ್ಬರು ತೀರ್ಥ, ಪ್ರಸಾದಗಳನ್ನು ವಿತರಿಸುವಾಗ ಹೇಳಿದರಂತೆ. 

ಇದ್ದ ಪ್ರಾಯಶಃ ಒಂದೇ ಒಂದು ಆದಾಯದ ಮೂಲವನ್ನು ಕಳೆದುಕೊಂಡ ಮೇಲೆ ಮೂರ್ತಿಯವರು ಕಳೆಗುಂದುತ್ತಾ ಬಂದರು. ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲೂ, ಶನಿವಾರಗಳಂದು ಹನುಮಂತನಗರದ ನರಸಿಂಹಸ್ವಾಮಿ ದೇವಸ್ಥಾನದಲ್ಲೂ, ಸಂಕಷ್ಟಹರ ಚತುರ್ಥಿಯ ದಿನ ದೊಡ್ಡ ಗಣೇಶನ ಗುಡಿಯಲ್ಲೂ ಮೂರ್ತಿಯವರು ಕಾಣುತ್ತಿದ್ದರು. ಎಷ್ಟೇ ಜನರಿದ್ದರೂ, ಅವರ ಮಾತಿನ ಸದ್ದು ಮೀರಿ,  ಮೂರ್ತಿಯವರು "ವಾತಾಪಿ ಗಣಪತಿಮ್ ಭಜೇ..." ಎಂದೋ "ಶ್ರೀಮನ್ನಾರಾಯಣ..."  ಎಂದೋ ಹಾಡುತ್ತಿದ್ದದ್ದು ಕೇಳುತ್ತಿತ್ತು. ದೇವಸ್ಥಾನಕ್ಕೆ ಬಂದ ಜನ ಮೂರ್ತಿಯವರ ಶಲ್ಯದೊಳಗೆ ಒಂದು ರೂಪಾಯಿ, ಎರಡು ರೂಪಾಯಿ ಹಾಕಿದಾಗ ಅವರು ಕೈಯೆತ್ತಿ ಮುಗಿಯುತ್ತಿದ್ದದ್ದು ನೆನೆಸಿಕೊಂಡರೆ ಒಂದು ತೆರನಾದ ಸಂಕಟವಾಗುತ್ತದೆ. ಅವರೊಡನೆ ಮಾತಾಡಿ ಬರುತ್ತೇನೆ ಎಂದು ಹೇಳಿದಾಗ, ಅಮ್ಮ ಕಾರಣ ಹೇಳದೆಯೇ, "ಆ ಮುದುಕನ ಜೊತೆ ನಿಂದೇನು ಮಾತು?!" ಎಂದು ಗದರಿ, ಎಳೆದುಕೊಂಡು ಬರುತ್ತಿದ್ದರು.   ರಸ್ತೆಯಲ್ಲಿ ಒಂದೆರಡು ಬಾರಿ ಕಂಡಾಗ ಅವರನ್ನು ನೋಡಿ ಪರಿಚಯದ ನಗೆ ನಕ್ಕೆನೇ ಹೊರತು, ಹೋಗಿ ಮಾತಾಡಲಿಲ್ಲ - ಅಮ್ಮನಿಗೆ ಹೆದರಿ. 

ಆನಂತರದ ವರ್ಷಗಳಲ್ಲಿ ಮೂರ್ತಿಯವರ ನೆನಪುಗಳು ಮಾಸಲು ಆರಂಭವಾಯಿತು ಎಂದು ಕಾಣುತ್ತದೆ. ನನ್ನನ್ನು ಕಂಡರೆ ಅಪರಿಚಿತರಂತೆ ಕಾಣುತ್ತಿದ್ದರು. ತಮ್ಮ ಬಗ್ಗೆಯೂ ಅವರಿಗೆ ನಿಗಾ ಕಡಿಮೆಯಾಗಿರಬೇಕು. ಕೊಳಕಾದ  ಜುಬ್ಬವನ್ನೇ ಧರಿಸುತ್ತಾ, ಇದ್ದ ಸ್ವಲ್ಪ ಕೂದಲು ಕೆದರಿದ್ದರೂ ಬಾಚದೆ ಓಡಾಡುತ್ತಿದ್ದರು. ಇಷ್ಟಾದರೂ, ಮತ್ತೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, ನಾನು ಕಂಡಂತೆ, ಕಾಲಿಡಲಿಲ್ಲ. ನಮ್ಮೊಡನೆ ಅಷ್ಟು ಆತ್ಮೀಯವಾಗಿದ್ದ ಅವರು ಹೀಗೆ ಹುಚ್ಚನಂತೆ ಓಡಾಡುತ್ತಿರುವಾಗಲೂ ನಮ್ಮ ಮನೆಯವರಾಗಲಿ ಅಥವಾ ಅವರಿಗೆ ಪರಿಚಯವಿದ್ದ ಬೇರೆಯವರಾಗಲಿ ಯಾಕೆ ಏನೂ ಸಹಾಯ ಮಾಡಲಿಲ್ಲ ಎಂದು ನನಗೆ ಅರ್ಥವಾಗಿಲ್ಲ. 

ಸ್ವಲ್ಪ ತಿಳಿವಳಿಕೆ ಬಂದಾಗಿನಿಂದ ಹಲವು ಬಾರಿ ಮೂರ್ತಿಯವರನ್ನು ಕೆಲಸದಿಂದ ತೆಗೆದು ಹಾಕಿದ ಘಟನೆಯ ಕುರಿತಾಗಿ, ನಾನು ಗ್ರಹಿಸಿಕೊಂಡಿರುವ ರಾಮಮೂರ್ತಿಯವರ ಕುರಿತಾಗಿ ಯೋಚಿಸಿದ್ದೇನೆ. ನನಗೆ ಆ ಆರೋಪದಲ್ಲಿ ತಿರುಳು ಕಂಡಿಲ್ಲ. ಅವರ ನೆನಪಿಗೆ ನ್ಯಾಯವೊದಗಿಸಿದ ಆತ್ಮತೃಪ್ತಿಯೊಂದನ್ನು ಬಿಟ್ಟರೆ ನನ್ನ ಈ ತೀರ್ಪಿನಿಂದ  ಯಾರಿಗೆ ಏನಾಗಬೇಕಿದೆ?  ಎಂದುಕೊಳ್ಳುತ್ತಾ ಕಾಫಿ ಲೋಟವನ್ನು ಬುಟ್ಟಿಗೆ ಎಸೆದು ರೂಮಿಗೆ ಬಂದೆ.



Tuesday, February 7, 2017

Yours Whimsically - Part 8: Book Thieves

After Class 7, I had an opportunity to go on a trek to the Himalayas. It was successful, with some lessons on independence and responsibility for a boy just entering into his teens. On returning, one of my uncles, a writer himself, asked me to write down my experiences in the form of a travelogue. In hindsight, I think it was merely a passing remark or at the most, he meant it as an exercise in organizing my thoughts on paper. However, I took it seriously. So serious that even before I wrote a single word, I was mentally writing down a guest list for the book release and rehearsing a few lines of the speech I would make at the event, desperately trying to sound mature beyond my years!

It took me a couple of months to complete the first (and only) draft. A full eighty-pages of a king-sized notebook. When my uncle came home, he glanced through the draft and even read a few lines aloud, acknowledging and appreciating the effort. He agreed to read it and review it, before any thought could be given to publishing it. He took it home and while they were shifting houses a few days later, the book seemed to have developed a will of its own and disappeared from the face of the earth. That was the last I ever heard of my nameless travelogue.

Some of us in the family share a similar interest in books. Relatives who come home, at the least, glance cursorily at the collection before leaving. These are moments of tremendous anxiety for my brother and me. 'What if they decide to take a book which we plan to read?' Children in Indian households are brought up to never say 'No' to elders and specially, relatives. However, that is not the only reason for our anxiety. Experience has taught us that every now and then, we invariably bid farewell to a book for the very last time. Any attempt to convince our parents to ask the concerned party to respectfully return the book to the rightful owners is met with "What would she think if we asked - for a mere book?" It is very difficult to fathom the undercurrents at play in a middle-class Indian family. For some days, my brother and I employed the (seemingly rude) strategy of rehabilitating vulnerable books in our wardrobes (where nobody would look into) at any remote sign of impending 'danger'!

Trysts with friends in this regard haven't been positive either. The very first time a friend of mine borrowed a book was when we were in high-school. Those were times when '3 Idiots' was rewriting box-office records and my friend felt compelled to read Chetan Bhagat's 'Five Point Someone'. I am not sure if he read the book or otherwise. However, it has been more than six years since and there is no sign of the book being returned. While some may argue that it worked in my favor by ridding me of a Chetan Bhagat book, it is, ultimately, a book.

It is for these reasons that we came up with a not-so-rude strategy the last time we reorganized the book shelf. We now have a catalogue of all the books in our possession. Every time a book leaves the perimeter of the house, it is dutifully recorded into the catalogue, with details of who it has been taken by and when.

It is not that the idea of a Kindle hasn't crossed the mind. But then, electronic copies of books, however convenient, don't give you an opportunity to show off the opulence, do they?!